*ಮೀರಾ ಭಜನೆ ಕನ್ನಡದ ಕಂಠದಲ್ಲಿ*
ಕೋರಿಕೆಯೊಂದ ಕೇಳೋ ಮುರಾರಿ
ಕೇಳೋ ಶ್ರೀಹರಿ ಈ ಹೃದಯದ ಅಧಿಕಾರಿಮೋಹನ ತಂದಿದೆ ಸವರಿದ ನವಿಲುಗರಿ
ಒಪ್ಪಿಕೋ ಎನ್ನನು ಮನ ಪಿತಾಂಬರಧಾರಿಜನುಮ ಜನುಮದಲಿ ಕೂಡಿದೆ ಈ ಲಗ್ನ
ಸಾಕ್ಷಿ ಕೇಳೆಲೋ ಇಂದು ತಾರೆ ಗಗನಕಾಯ್ದಿಹೆ ನಿನಗೆ ಪ್ರತಿ ಉಸುರನು ತೇಯ್ದು
ಸತಾವಣೆ ಏಕೆ ಮನಸನು ಕದ್ದೊಯ್ದುಕಂಗಳು ಕಾದಿವೆ ಮುಚ್ಚದೇ
ರೆಪ್ಪೆ ಮುಚ್ಚದ ಲೋಚನನೆಒಪ್ಪು ಪ್ರೇಮವ ಬಾಧಾಹರ ಭವ ವಿಪತ್ತಿ ಮೋಚನನೇ
ಸ್ವಾಗತ ಕೋರುವ ಸತ್ತಾ ಕೊಡು ಹರಿ
ಶರಣಾಗತ ವತ್ಸಲ ಭಕ್ತ ಪೂಜಾರಿಏನು ಹೇಳಲಿ ನೀ ಅಂತರ್ಯಾಮಿ
ತನು ಮನ ಘನ ಪ್ರಾಣದ ಸ್ವಾಮಿಕರುಣಾಕರ ದಾಮೋದರ ವಿಠಲ
ಒಪ್ಪಿಕೋ ಈಗಲೇ ಮೀರಾಲೋಲ

YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...