: 🙏🙏ಹರೇಕೃಷ್ಣ🙏🙏
ಅಚ್ಯುತಾನಂತ ಗೋವಿಂದ, ಹರಿ, ಸಚ್ಚಿದಾನಂದ ಸ್ವರೂಪ ಮುಕುಂದ ||ಪ||
ಕೇಶವ ಕೃಷ್ಣ ಮುಕುಂದ, ಹರಿ, ವಾಸುದೇವ ಗುರು ಜಗದಾದಿವಂದ್ಯ
ಯಶೋದೆಯ ಸುಕೃತದ ಕಂದ, ಸ್ವಾಮಿ, ಶೇಷ ಶಯನ ಭಕ್ತ ಹೃದಯಾನಂದನಾರಾಯಣ ನಿನ್ನ ನಾಮವೆನ್ನ, ನಾಲಿಗೆ ಮೇಲಿರಬೇಕೆಂಬ ನೇಮ
ನಾನು ಬೇಡುವೆ ನಿನ್ನ ನಾಮ, ಪ್ರಾಣ, ಪಯಣ ಸಮಯಕೊದಗಲಿ ಗುಣಧಾಮಮಾಧವ ಮಂಗಳಗಾತ್ರ, ಸ್ವಾಮಿ, ಯಾದವ ಕೈಲಾಸ ವಾಸನ ಮಿತ್ರ
ಮಹಿಮೆ ಕೇಳಿದರೆ ವಿಚಿತ್ರ, ನಿನ್ನ, ಮನ ಮೆಚ್ಚಲಿ ಸತ್ಯಭಾಮಾಕಳತ್ರಗೋವಿಂದ ಗೋಪಾಲ ಬಾಲ, ಸೋಳ ಸಾಸಿರ ಗೋಪೇರ ಆನಂದ ಲೀಲಾ
ನೀಲ ಮಣಿ ಮುಕ್ತಾಮಾಲ, ನಿಮ್ಮನೇನೆಂದು ಕರೆಯಲಿ ಸುಗ್ರೀವ ಪಾಲವಿಷ್ಣು ಚಕ್ರವು ಬಂದು ಸುತ್ತಿ, ಮೂರು ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ
ಕೃಷ್ಣ ಸಲಹೆಂದು ಮೊರೆಯಿಟ್ಟ, ಮುನಿ ಶ್ರೇಷ್ಟಗಿಷ್ಟರ ಮೇಲೆ ಅಭಯವ ಕೊಟ್ಟೆಮಧುಸೂದನ ಮಾರಜನಕ, ಮದಗಜ ಸೀಳಿ ಮಲ್ಲರ ಗೆಲಿದೆ ತವಕ
ಒದಗಿ ಕಂಸನ ಕೊಂದ ಬಳಿಕ, ನೀ, ಮುದುಕಗೆ ಪಟ್ಟವ ಕಟ್ಟಿದ್ಯೋ ಧನಿಕತ್ರಿವಿಕ್ರಮ ತ್ರೈಲೋಕ್ಯನಾಥ, ದೇವ, ತ್ರಿಪುರದ ಸತಿಯರ ವ್ರತಕೆ ವಿಘಾತ
ಯದುವಂಶ ಪಾಂಡವ ಪ್ರೀತ, ಎನ್ನ, ಹೃದಯದೊಳಡಗಿರೊ ಶ್ರೀ ಜಗನ್ನಾಥವಾಮನ ರೂಪಿಲಿ ಬಂದು, ಬಲಿಯ ದಾನವ ಬೇಡಲು ಉಚಿತವು ಎಂದು
ಧಾರೆಯನೆರೆಯಲು ಅಂದು, ಬೆಳೆದು ಧಾರಿಣಿಯೆಲ್ಲವನಳೆದ್ಯೊ ನೀನಂದುಶ್ರೀಧರ ಶೃಂಗಾರ ಹಾರ, ದಿವ್ಯ, ಶ್ರೀವತ್ಸಲಾಂಛನ ಶ್ರೀ ರಘುವೀರ
ವಾರಿಧಿ ಸಮ ಗಂಭೀರ, ಧೀರ, ಕ್ರೂರ ರಕ್ಕಸರನೆಲ್ಲರ ಸಂಹಾರಹೃಷಿಕೇಶ ವೃಂದಾವನದಲಿ, ನೀ, ಹರುಷದಿ ಕೊಳಲನೂದುತ ಯಮುನೆಯಲಿ
ಸತಿಯರ ಸಮ್ಮೇಳದಲಿ, ನೀ, ಧರಿಸಿದ್ಯೊ ಮಂದಾರ ಮಾಲೆ ಕೊರಳಲ್ಲಿಪದ್ಮನಾಭ ಕೇಳೊ ಘನ್ನ, ಪಾದ, ಪದ್ಮವ ತೋರಿಸೊ ಬೇಗನೆ ನಿನ್ನ
ಮುದ್ದು ಮುಖವ ತೋರಿಯೆನ್ನ, ಬೇಗ, ಉದ್ಧಾರ ಮಾಡೆಂದು ಬೇಡುವೆ ನಿನ್ನದಾಮೋದರ ಗುಣಧಾಮ, ಸ್ವಾಮಿ, ದಾನವಾಂತಕ ಯದುಕುಲ ಸಾರ್ವಭೌಮ
ನೀಲಮೇಘನಿಭಶ್ಯಾಮ, ಕೃಷ್ಣ, ನೀಳಾಪತಿಯೆಂಬ ಬಹು ಪುಣ್ಯನಾಮಸಂಕರ್ಷಣ ದನುಜಹರಣ, ದೇವ, ಪಂಕಜಮುಖಿ ದ್ರೌಪದಿ ಮೇಲೆ ಕರುಣ
ಕುಂಕುಮಾಂಕಿತ ರೇಖಾ ಚರಣ, ನಿಜ, ಕಂಕಣ ಕೇಯೂರ ಕೌಸ್ತುಭಾಭರಣವಾಸುದೇವ ಕೇಳೊ ನಿನ್ನ, ದಿವ್ಯ, ಸಾಸಿರ ನಾಮವ ನೆನೆವನೆ ಧನ್ಯ
ಬೇಸರದೆ ಸಲಹಬೇಕೆನ್ನ ತುಸ ಘಾಸಿಯ ಮಾಡದೆ ಕರುಣಾ ಸಂಪನ್ನ

YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...