* *ಶ್ರೀಂ ಶ್ರೀ ಕಂ ಕಪಿಲಾಯ ನಮಃ* *ದೇವಕಾರ್ಯಾದಪಿ ಮುನೇ ಪಿತೃಕಾರ್ಯಂ ವಿಶಿಷ್ಟ್ಯತೇ* ಎಂಬ ಶ್ರೀಮದ್ ವೇದವ್ಯಾಸದೇವರ ವಾಕ್ಯದಂತೆ, ದೇವಕಾರ್ಯಕ್ಕಿಂತಲೂ ಪಿತೃಕಾರ್ಯ ವಿಶೇಷವಾದದ್ದು. ದೇವರ ಪೂಜೆ ಇತ್ಯಾದಿಗಳನ್ನು ಖಂಡಿತಾ ಶ್ರದ್ಧೆಯಿಂದಲೇ ಮಾಡಬೇಕು. ಆದರೆ ಪಿತೃಕಾರ್ಯಗಳಲ್ಲಿ ಇನ್ನೂ ಅಧಿಕವಾದ ಶ್ರದ್ಧೆ ಇರಲೇಬೇಕು. *ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ* ಈ ಮಹಾಲಯದ ಸಂದರ್ಭದಲ್ಲಿ *ಅಪರಪಕ್ಷದ* ಈ ಸಂದರ್ಭದಲ್ಲಿ ಎಲ್ಲ ಪಿತೃಗಳಿಗೆ ಪ್ರಿಯವಾದ 96 ಶ್ರಾದ್ಧಗಳ ನಿಯಾಮಕನಾದ, ಅಂತರ್ಗತನಾದ *ಷಣ್ಣವತಿ* ನಾಮಕ ಪರಮಾತ್ಮನ ವಿಶೇಷ ರೂಪಗಳ ಸ್ಮರಣೆ ಮಾಡುವಂತಾಗಲಿ. ಷಣ್ಣವತಿ ನಾಮಕನಾದ ಪರಮಾತ್ಮನು ವಸು ರುದ್ರ,ಆದಿತ್ಯರಲ್ಲಿ ನೆಲೆಸಿ ತನ್ನ ಭಕ್ತರು ಪ್ರತಿನಿತ್ಯ ಶ್ರದ್ಧೆಯಿಂದ, ಭಕ್ತಿಯಿಂದ, ಕಲ್ಮಷರಹಿತನಾಗಿ ಮಾಡುವ ಪುಣ್ಯ ಕರ್ಮಗಳನ್ನು ಸ್ವೀಕರಿಸುವನಾಗಿದ್ದಾನೆ. ಅದರಿಂದ ಪಿತೃಗಳಿಗೆ ಸುಖವನ್ನು ನೀಡುವನಾಗಿದ್ದಾನೆ. ಇಂದು ವಿಶೇಷವಾಗಿ *ಶ್ರೀ ವಿಜಯ ಪ್ರಭುಗಳ ಪೈತೃಕ ಸುಳಾದಿ*, *ಶ್ರೀ ಮಾನವಿ ಪ್ರಭುಗಳ ಪಿತೃಗಣಸಂಧಿ* ಪಾರ
31 parts